This story gives you history in an emotional way
ಯಾವುದೇ ಪೂರ್ವ ವಿವರಗಳಿಲ್ಲದೇ, ನಿರೀಕ್ಷೆಗಳಿಲ್ಲದೇ ಈ ಕಾದಂಬರಿಯನ್ನು ಕೊಂಡುಕೊಂಡಿದ್ದೆ ಹಲವು ಮಿತ್ರರ ಸಲಹೆಯಂತೆ. ಇದೆಂತಹ ವಿಚಿತ್ರ ಹೆಸರು ಎಂದುಕೊಂಡಿದ್ದೆನೇ ಹೊರತು ಆ ಹೆಸರಿನ ಅರ್ಥವನ್ನು ಹುಡುಕುವ ಪ್ರಯತ್ನ ಮಾಡಿರಲೇ ಇಲ್ಲ... ಮಾಡಿದ್ದರೆ ಈ ಮೊದಲೇ ಕಾದಂಬರಿ ನನ್ನ ನೆಚ್ಟಿನ ಪಟ್ಟಿಯಲ್ಲಿ ಒಂದಾಗಿರುತ್ತಿತ್ತೇನೋ...
ಈ ಮೊದಲೇ ಹೇಳಿದಂತೆ ನಿರೀಕ್ಷೆಗಳಿಲ್ಲದೆಯೇ, ಏನೊಂದೂ ಸಣ್ಣ ವಿವರದ ಅರಿವಿಲ್ಲದೆಯೇ ಓದಲಾರಂಭಿಸಿದೆ. ಓದುತ್ತಾ ಓದುತ್ತಾ ಇದರ ಬಗ್ಗೆ ಒಂದೊಳ್ಳೆಯ ವಿಮರ್ಶೆಯನ್ನು ಬರೆಯಲೇಬೇಕು ಎಂದುಕೊಳ್ಳುತ್ತಾ ಮನಸ್ಸಲ್ಲೇ ಪದಗಳನ್ನು, ವಾಕ್ಯಗಳನ್ನು ಹೆಣೆಯುತ್ತಲಿದ್ದೆ... ಹಾಗೇ ಓದುತ್ತಿದ್ದೆ...
ಆದರೆ...
ಓದಿ ಮುಗಿಸಿದ ಈ ಹೊತ್ತು ಹೆಣೆದಿಟ್ಟ ಪದಗಳು, ವಾಕ್ಯಗಳು ಕಾಣೆಯಾಗಿವೆ. ಎಲ್ಲಿ? ಹೇಗೇ?....
ಧರ್ಮಯುದ್ಧದ ರಕ್ತಕೋಡಿಯಲ್ಲಿ ಹರಿದುಹೋದವೇ? ಹ್ಯಾನಾ, ರುಬೆಕ್ಕಾರ ಮುಗಿಯದ, ಮರೆಯಲಾರದ, ಬೇವಿಗಿಂತಲೂ ಕಹಿಯಾದ ನೆನಪುಗಳಲ್ಲೆಲ್ಲೋ ಕಳೆದುಹೋದವೇ? ಸರ್ವಾಧಿಕಾರಿ ಹಿಟ್ಲರನ ಶೋಷಣೆಗೆ ಹೆದರಿ ಮುದುಡಿ ಕುಳಿತವೇ? ಡಕಾವ್ ನಾಜಿ ಕ್ಯಾಂಪ್ ಎಂಬ ಮೃತ್ಯುಕೂಪದಲ್ಲಿ ಸಾವು ಬದುಕಿನ ಹೋರಾಟದಲ್ಲಿ ಯಹೂದಿಗಳು ಹರಿಸಿದ ಕಣ್ಣೀರಿನಲ್ಲಿ ಕರಗಿ ಹೋದವೇ?? ಅಲ್ಲಿನ ಕ್ರೆಮಟೋರಿಯಂ ಹಾಗೂ ಗ್ಯಾಸ್ ಛೇಂಬರ್ ಗಳಲ್ಲಿ ನಿಶ್ಶಕ್ತರು ಸತ್ತಂತೆ ಉಸಿರುಗಟ್ಟಿ ಸತ್ತು ಹೋದವೇ? ಅಥವಾ ವಾಷಿಂಗ್ಟನ್ ನ ಹೊಲೊಕಾಸ್ಟ್ ಮ್ಯುಸಿಯಂ ನ ಸಾವಿರಾರು ನೆನಪುಗಳ ಕುರುಹು, ಪಳೆಯುಳಿಕೆಗಳ ನಡುವೆ ಅಡಗಿ ಕುಳಿತವೇ???
ತನ್ನವರನ್ನೆಲ್ಲಾ ಕಳೆದುಕೊಂಡು, ತನ್ನದಲ್ಲದ ನಾಡಿನಲ್ಲಿ, ಭೂತಕಾಲದ ನೆನಪಿನೊಂದಿಗೆ ಬಾಲ್ಯವನ್ನು ಕಳೆಯುತ್ತಾ, ಭವಿಷ್ಯದ ಕನಸನ್ನೂ ಕಾಣಲಾರದಂತೆ ತಾನು ತಾನೇ ಅಲ್ಲದಂತೇ ಪುಟ್ಟ ಹುಡುಗಿ ಹ್ಯಾನಾ, ಅನಿತಾಳಾಗಿ ದಶಕ ದಶಕಗಳ ಕಾಲ ತನ್ನ ಅಸ್ತಿತ್ವವನ್ನೇ ಬದಲಿಸಿಕೊಂಡು ಬದುಕಿದ ಬಗೆ ನೆನೆದರೆ......
ನಿಟ್ಟುಸಿರು... ಜೊತೆಗೊಂದು ವಿಷಾದದ ನಗು.
ಇನ್ನೇನೂ ತೋಚದು ಗೀಚಲು...
ಒಮ್ಮೆ ಓದಿ ಈ ಕತೆಯನ್ನು; ಒಂದಿಡೀ ಜನಾಂಗದ ಸರ್ವನಾಶಕ್ಕೆ ಎದೆಯೆತ್ತಿ ನಿಂತ ಸರ್ವಾಧಿಕಾರಿ ಹಾಗೂ ಆತನ ಸಾಮ್ರಾಜ್ಯದ ಕತೆ; ಇಡೀ ಜಗತ್ತಿಗೇ ಜಗತ್ತು ಕಣ್ಬಿಟ್ಟು, ಬಾಯ್ಮುಚ್ಚಿ ಸಾವಿರ ಸಾವಿರ ಸಾವುಗಳನ್ನು ಕುರುಡುತನದಲ್ಲೇ ನೋಡಿದ ಕತೆ...
-ಪಲ್ಲವಿ ಭಾಗವತ್
ತನ್ನ ನೆಲಕ್ಕೆ ಮರಳುವ ಆಸೆ, ಎಲ್ಲೋ ಇರುವ ತನ್ನವರಿಗಾಗಿ ಹುಡುಕಾಟ, ಹಿಟ್ಲರ್ ನ ಕ್ರೂರತನ, ಹೊಸ ಜಗತ್ತಿಗೆ ಕಾಲಿಟ್ಟು ಹೊಸತನವನ್ನು ತನ್ನ ಜೀವನಕ್ಕೆ ಅಳವಡಿಸಿಕೊಳ್ಳುವ ಪರಿ, ಆ ಪುಟ್ಟ ಬಾಲಕಿಯ ಜೀವನದ ಕತೆ ಮನಮುಟ್ಟುವಂತಿದೆ. ನಿಜಕ್ಕೂ ಅದ್ಬುತವಾದ ಪುಸ್ತಕ ಇದಾಗಿದೆ
ಲೇಖಕರ ವಿಷಯ ಸಂಗ್ರಹ ಅದ್ಭುತ. ಪ್ರಪಂಚದ ಪರ್ಯಟನೆ ಮಾಡುತ್ತಾ ಆ ವಿಷಯಗಳನ್ನು ತಮ್ಮ ಸರಳ ಭಾಷೆಯಿಂದ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಹಿಟ್ಲರ್ ನ ಕ್ರೂರತೆ ಭಯ ಬೀಳಿಸುತ್ತದೆ. ನರಳಿದ ಆತ್ಮಗಳು ಇಂದು museum ನಲ್ಲಿ ಚರಿತ್ರೆಯ ಪುಟಗಳಾಗಿರುವುದು, ಹಾಗೆ ಅವರ ಸಂಭಂದಿಕರು ಭಾರತದ ವರೆಗೂ ವಲಸೆ ಬಂದು ನಮ್ಮ ಬೆಂಗಳೂರಿನಲ್ಲಿ ಇರುವುದು ಇವೆಲ್ಲಾ ಮನವನ್ನು ಕಲಕುತ್ತದೆ.
ಯಹೂದಿ ಹ್ಯಾನ ಮೊಸಸ್ ಭಾರತದ ಮಣ್ಣಲ್ಲಿ ಭಾರತದ ಸೊಸೆ ಅನಿತಾ ಆಗುವ ಕಥೆ..ಮತ್ತೆ ತನ್ನ ಬೇರುಗಳನ್ನು ಅರಸಿ ಜರ್ಮನಿ ಗೆ ತೆರಳುವ ಕುವರಿ. ಹಿಟ್ಲರ್ ನ concentration ಕ್ಯಾಂಪ್ ಗಳಲ್ಲಿ ನರಕ ಅನುಭವಿಸಿ ದತನ್ನವರ ಹುಡುಕುವ ಹಾದಿಯಲ್ಲಿ ಸಾಗುವ ಹ್ಯಾನ
ಈ ಕಾದಂಬರಿಯ ಕಥೆ ಕಾಲ್ಪನಿಕವಾಗಿದ್ದರೂ ಇದು ಹಲವಾರು ಯಹೂದಿಗಳ ನಿಜ ಜೀವನದ ತುಣುಕುಗಳಿಂದ ಕೂಡಿದ್ದಾಗಿದೆ. ಸಾವಿರ ಸಾವಿರ ಸಾವುಗಳ ಮಾಹಿತಿ ಓದಿದಾಗ ಅದು ಅಂಕಿಅಂಶವಾಗಿ ಮಾತ್ರ ಉಳಿಯುತ್ತದೆ. ಆದರೆ ಅದನ್ನು ಓರ್ವ ವ್ಯಕ್ತಿಯ ಕಥೆಯಾಗಿ ನಮ್ಮ ಮುಂದೆ ಇಟ್ಟಲ್ಲಿ ಅದು ನಮ್ಮ ಮನದಲ್ಲಿ ಮಾಡುವ ಪರಿಣಾಮ ಹೆಚ್ಚು ಘನವಾದದ್ದೇ ಆಗಿರುತ್ತದೆ.
ಈ ಹೊತ್ತಿಗೆಗಾಗಿ ಲೇಖಕಿ ನೇಮಿಚಂದ್ರ ಅವರು ಪಟ್ಟಿರುವ ಪರಿಶ್ರಮ, ಮಾಡಿರುವ ಅಧ್ಯಯನ, ನೋಡಿ ಬಂದ ಸ್ಥಗಳು ಅಷ್ಟಿಷ್ಟಲ್ಲ. ಎಲ್ಲಿಯೂ ಬೇಸರವಾಗದಂತೆ ಕಥೆಯನ್ನು ಹೆಣೆದು ಇತಿಹಾಸದ ತುಣುಕುಗಳನ್ನು ಅಲ್ಲಲ್ಲಿ ಚೆಲ್ಲಿ ಒಂದು ರೋಚಕ ಕಥನವನ್ನು ಕೊಟ್ಟಿದ್ದಾರೆ.
Abba ! Such an amazing book ! .. It gave me rattling thoughts for about a week on times Nazi Concentration camps. Opens up dark reality of Germany, Hitler .. it leaves u with single thought- How the whole Germany and other countries remained dumb viewers of all cruelty !
More sad part is, world has accepted Hitler as role model, and I hear young people saying I like Hitler. Irony is Daemon can become angel over period of time with tweak in the history and by exaggerating only few good things about "the daemon."
Really a must read for all Kannadiga book lovers.
Please read this book !
சமீபத்தில் நான் படித்த மிகச்சிறந்த மொழிபெயர்ப்பு புத்தகங்களில் ஒன்று இது . கன்னட மொழியிலிருந்து மொழிபெயர்க்கப்பட்ட நாவல் என்பதையே மறந்து , கதை கர்நாடகாவில் நடக்கிறது என்கிற விஷயமே மறந்து தமிழ்நாட்டில் வாழ்ந்த யூத பெண்ணுக்கு நடந்த கதை மாதிரி உணரவைத்ததற்கு ஆசிரியர் நல்லசிவம் எடுத்துக்கொண்ட முயற்சி பாராட்டத்தக்கது . தமிழ் மொழியின் தவழ்ந்து வளர்ந்தவன் என்பதால் திராவிட குடும்பத்து கன்னட வாடை எனக்கு சரியாக அடிக்கவில்லையா என்று தெரியவில்லை . ஆனால் கதையில் அனிதா என்கிற ஹன்யாவுடனே பயணித்தேன் . ஒரு இடத்தில் கூட நான் அனிதாவை விட்டோ அவள் என்னை விட்டோ பிரிந்து செல்லவில்லை . ஆசிரியர் நேமிசந்திராவின் ஆளுமையின் திறன் வாசிப்போரை வசப்படுத்தி , ஆசிரியரின் வார்த்தைகளை தாண்டி வெளியே செல்லவிடாமல் வைத்திருக்கிறது . ஹிட்லரின் பிடியில் சிக்கி சின்னபின்னமாகி மீண்டெழுந்து ஒரு இனத்தின் கதையை வேறொரு கோணத்தில் , ஒரு இந்திய பெண்ணின் (இந்தியா பெண்ணாக மாறிய யூத பெண்ணின் ) கோணத்தில் ஆரம்பித்து இறுதியில் மனிதகுலத்தின் குரலாக அனிதாவை ஒலிக்க வைத்து , உண்மையை உரக்க சொல்லியிருக்கிறார் ஆசிரியர் . roots , the bite of the mango போன்ற நாவல்களுக்கு இணையான இந்திய படைப்பு இந்த யாத் வஸேம் என்று சொல்லினால் மிகையாகாது .
ಹಿಟ್ಲರ್ ನ ನಾಜ಼ಿ ಪಡೆ ಯಹೂದೀ ಗಳ ಮೇಲೆ ನಡೆಸಿದ ಅಮಾನವೀಯ, ರಾಕ್ಷಸಿ ಕೃತ್ಯ ತಿಳಿಯಬೇಕಿದಲ್ಲಿ ನಿಮಿಗಿದೋ ನೇಮಿಚಂದ್ರ ರ "ಯಾದ್ ವಶೇಮ್" .
ಯಾವುದೋ ಓಬೀರಾಯನ ಪೂರಾಣದಲ್ಲಿ ನಡೆದ ಆರ್ಯ ಅನಾರ್ಯ ರ ಕದನವನ್ನು ಇಪ್ಪತ್ತನೇ ಶತಮಾನದಲ್ಲಿ ಯಹೂದೀಗಳನ್ನು ಗುರಿ ಮಾಡಿದ ನಾಜ಼ಿಗಳ ಅಟ್ಟಹಾಸ ಓದಿದರೆ ಕರುಳು ಚುರ್ ಎನ್ನದೆ ಇರಲಾರದು.
ಲೇಖಕಿ ನೇಮಿಚಂದ್ರರ ಈ ಕಾದಂಬರಿ ಬಹಳ ಇಷ್ಟವಾಗುವುದು ಅವರ ನವಿರಾದ ನಿರೂಪಣೆ, ಹಳ್ಳಿ ಸೊಗಡಿನ ಸಂಭಾಷಣೆ, ಪೂರ್ವ ಪಶ್ಚಿಮ ಪಾತ್ರಗಳ ಹಾಗೂ ಎರಡು ಸಂಸ್ಕೃತಿಯಲ್ಲಿನ ವ್ಯತಾಸಗಳನ್ನ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಅಂತ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ, ಈ ಬಗ್ಗೆ ಓದುತ್ತಿರುವಾಗ ನಮಗೆ ಆ ಬೆಂಗಳೂರಿನ ಚಿತ್ರಣ ಮೂಡಿ ಬಂದು ನಾವು ಆಗಿನ ಬೆಂಗಳೂರಿಗನಾಗಿದ್ದರೆ ಎಷ್ಟು ಸೊಗಸು ಅಂತ ಅನಿಸಬಹುದೇನೊ? ಕಥಾವಸ್ತು ಬೆಂಗಳೂರಿಂದ ಶುರುವಾಗಿ ದೂರದ ಜರ್ಮನಿ, ಆಮ್ಸ್ಟರ್ಡ್ಯಾಮ್, ಇಸ್ರೇಲ್ ಹಾಗೂ ಅಮೆರಿಕವೆಲ್ಲ ಸುತ್ತು ಹೊಡೆಯುತ್ತದೆ, ಎಲ್ಲಿಯೂ ಸಹ ಕಥೆ ಚಿಟ್ಟು ಹಿಡಿಸದು. ಇಡೀ ಕಾದಂಬರಿಯಲ್ಲಿ ನನಗೆ ತುಂಬಾ ಹಿಡಿಸಿದ ಪಾತ್ರ ವಿವೇಕನ ತಾಯಿ ಹಾಗೂ ನಾಜ಼ಿಗಳ ಅಟ್ಟಹಾಸವನ್ನ ಎದುರಿಸಿದ ರೆಬೆಕ್ಕಾ ಮೋಸೆಸ್ ಪಾತ್ರ, ಆ ಪಾತ್ರ ತನ್ನ ಕಷ್ಟ ಕೋಟಲೆಗಳನ್ನ ವಿವರಿಸುವಾಗ ನನಗರಿಯದಂತೆ ಭಾವುಕನಾದೆ ಕೆಲ ನಿಮಿಷ ಓದಲು ಸಾಧ್ಯವಾಗಲಿಲ್ಲ...
ಇದು ಈ ಕಾದಂಬರಿಯ ತಾಕತ್ತು.
ಪುಸ್ತಕ -ಯಾದ್ ವಶೇಮ್
ಲೇಖಕರು- ನೇಮಿಚಂದ್ರ
ನವಕರ್ನಾಟಕ ಪ್ರಕಾಶನ
ಬೆಲೆ -240
ಗೋರಿಪಾಳ್ಯದ ಸ್ಮಶಾನ ಒಂದರಲ್ಲಿ ಕಂಡ ಅಪರಿಚಿತ ಭಾಷೆಯ ಲಿಪಿಯೇ ಈ ಕಥೆಯ ಹುಟ್ಟಿಗೆ ಕಾರಣ. ಯಾವ ಭಾರತೀಯ ಭಾಷೆಯ ಲಿಪಿಯನ್ನು ಹೋಲುತ್ತಿರದ ಸಮಾಧಿಯ ಮೇಲಿನ ಗೀಟುಗೆರೆಗಳು ಸಂಶೋಧನಾ ಪ್ರವರ್ತಿಯ ಲೇಖಕಿಯ ಕುತೂಹಲವನ್ನು ಕೆಣಕಿಸಿದೆ.ಅದು ಹೀಬ್ರೂ ಭಾಷೆಯ ಲಿಪಿ ಎಂದು ತಿಳಿದಾಗ, ಎಲ್ಲಿಯ ಇಸ್ರೇಲ್ ಎಲ್ಲಿಯ ಗೋರಿಪಾಳ್ಯ ಇವೆರಡಕ್ಕೂ ಎತ್ತಣದ ಸಂಬಂಧ ಎನ್ನುವ ಪ್ರಶ್ನೆ ಕಥೆಯ ಹುಟ್ಟಿಗೆ ಕಾರಣ.
ಒಂದು ಕಥೆಯ ಎಳೆಯೇನು ಸಿಕ್ಕಿದೆ ಎಂದು ಈ ಕಾದಂಬರಿಯನ್ನು ಬರೆದು ಮುಗಿಸಿಲ್ಲ ಲೇಖಕಿ. ಈ ಪುಸ್ತಕಕ್ಕೊಸ್ಕರ ಅವರು ಖಂಡ ಖಂಡಗಳನ್ನು ಅಲೆದು ಬಂದಿದ್ದಾರೆ. ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. ಇತಿಹಾಸಗಳ ಪುಟದತಿರುವಿದ್ದಾರೆ. ಸತತ 12 ವರ್ಷ ಕಥೆಯನ್ನು ಹೆಣೆದಿದ್ದಾರೆ. ಪಾತ್ರಗಳನ್ನು ಪೋಷಿಸಿ ಇತಿಹಾಸಕ್ಕೆ ಇಲ್ಲೂ ಚ್ಯುತಿ ಬರದಂತೆ, ಭವಿಷ್ಯಕ್ಕೆ ಮಾರ್ಗದರ್ಶಿ ಆಗುವಂತೆ ಪುಸ್ತಕ ಬರೆದಿದ್ದಾರೆ.
ಕಥಾ ಹಂದರ ಇಷ್ಟೇ.. ಕಥಾನಾಯಕಿ ಯಹೂದಿ, ಜರ್ಮನಿಯ ನಾಜಿ ಅಧಿಕಾರಿಗಳಿಂದ ಹೇಗೋ ತಪ್ಪಿಸಿಕೊಂಡು ತಂದೆಯ ಜೊತೆಗೂಡಿ ಅಮ್ಮ, ಅಕ್ಕ, ಮತ್ತು ತಮ್ಮನಿಂದ ದೂರವಾಗಿ ಭಾರತಕ್ಕೆ ಬರುತ್ತಾಳೆ. ಇಲ್ಲಿಯೇ ಅವಳ ಬೆಳವಣಿಗೆ ಆಗುತ್ತದೆ. ಭಾರತೀಯಳಾಗಿ ಬದುಕುತ್ತಾ ಇರುತ್ತಾಳೆ. ಆದರೆ ಅವಳಿಗೆ ಪ್ರತಿ ಕ್ಷಣವೂ ತನ್ನ ತಾಯ್ನಾಡಿಗೆ ಒಮ್ಮೆ ಹೋಗಿ ತನ್ನವರನ್ನು ಕೂಡಿ ಬರಬೇಕೆನ್ನುವ ಹಂಬಲ ಅದಕ್ಕಾಗಿ ತನ್ನ ಇಳಿ ವಯಸ್ಸಿನಲ್ಲಿ ತಾಯ್ನಾಡಿಗೆ ಹೋಗುತ್ತಾಳೆ. ತನ್ನವರನ್ನು ಹುಡುಕಿಕೊಂಡು ಹೋದ ನಾಯಕಿಗೆ ಏನು ಸಿಕ್ಕಿತು? ತನ್ನವರನ್ನು ಸೇರಿದಾಗ ಅವಳ ಮನಸ್ಸಿನ ತುಮುಲಗಳು ಯಾವ ರೀತಿ ಇದ್ದವು ಎನ್ನುವಾದನ್ನು ಪುಸ್ತಕವನ್ನು ಓದಿಯೇ ಸವಿಯಬೇಕು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಕೂಡ ಈ ಕೃತಿಗೆ ದೊರಕಿದೆ. ಕನ್ನಡದ ಪುಸ್ತಕ ಓದುಗರೆಲ್ಲ ಓದಬೇಕೆನ್ನುವ ಪಟ್ಟಿಯಲ್ಲಿ ಈ ಪುಸ್ತಕ ಸೇರುತ್ತದೆ.
ಕೊನೆಯಲ್ಲಿ ಪುಸ್ತಕದ ಆಶಯ ಇಷ್ಟೇ…
ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ... ಅಮೇರಿಕಾ, ಜರ್ಮನಿ, ಇಸ್ರೇಲ್…ಅಹಿಂಸೆಯನ್ನೇ ಸಾರಿದ ಭಾರತದಲ್ಲೂ ಕೂಡ…ನಮ್ಮ ನಡುವೆ, ಕೊನೆಗೆ ನಮ್ಮಲ್ಲಿ ಕೂಡ ಹುಟ್ಟಬಲ್ಲ…
ಆದರೆ ಹಿಟ್ಲರನ್ನು ತಡೆ ಹಿಡಿಯುವ ಹೊಣೆ ನಮ್ಮದು….
ಏನು ಹೇಳುವುದು ಈ ಕೃತಿಯ ಬಗ್ಗೆ....!?! ಇತಿಹಾಸದ ಕರಾಳ ಅಧ್ಯಾಯವನ್ನು ಬಿಚ್ಚಿಡುತ್ತಾ ಸಾಗುತ್ತೆ.. ತನ್ನವರೆಲ್ಲರನ್ನು ಕಳೆದುಕೊಂಡು ಭಾರತಕ್ಕೆ ಬಂದು ಹ್ಯಾನಾ ಮೋಸೆಸ್ ನಿಂದ ಅನಿತಾ ಆಗಿ ಇಲ್ಲಿಯ ಜನರ ನಡುವೆ ಬದುಕಿದ್ದೂ ಸಹ, ಶತಮಾನದ ನೋವಿನ, ತನ್ನವರ ಅಗಲಿದ ಬೆಂಕಿಯನ್ನು ಸೆರಗಲ್ಲಿ ಕಟ್ಟಿಕೊಂಡು ಜೀವನದ ಸಂಧ್ಯಾ ಕಾಲದಲ್ಲಿ ಅವರನ್ನು ಹುಡುಕಿ ಹೊರಟ ಪಯಣ.ಹಿಟ್ಲರನ ಜರ್ಮನಿಯಿಂದ ತಪ್ಪಿಸಿಕೊಂಡು ಬದುಕು ಕಟ್ಟಿಕೊಂಡ ಹಲವು ಯಹೂದಿಗಳ ಕಥೆ ಒಂದೇ ತರಹ. ಕ್ರೌರ್ಯ ಒಂದೇ, ಹೆಸರು ಬೇರೆ ಅಷ್ಟೇ. 60 ಲಕ್ಷ ಯಹೂದಿಯರನ್ನು ಕೊಂದ ನಾಜಿಗಳ ಕ್ರೌರ್ಯವನ್ನು ಹೇಗೆ ಹೇಳುವುದು? ಸತ್ತ ಮಕ್ಕಳ ಸಂಖ್ಯೆಯೇ 15 ಲಕ್ಷ. ಜೆರುಸಲೇಮ್ ನ ಪವಿತ್ರ ಭೂಮಿ ಹೊಡೆದಾಟಗಳಿಂದ ರಕ್ತಸಿಕ್ತವಾಗಿದೆ.ಕಾನ್ಸಂಟ್ರೇಷನ್ ಕ್ಯಾಂಪ್ ಗಳಲ್ಲಿ ಆದ ಅಮಾನುಷ ಕೃತ್ಯಗಳ ಬಗೆಗೆ ನೆನೆದರೆ ಮಾನವನಲ್ಲಿ ಮಾನವೀಯತೆ ಈ ಮಟ್ಟಕ್ಕೆ ಕುಸಿದು ಬೀಳಬಹುದಿತ್ತೆ? ಅದು 20ನೇ ಶತಮಾನದಲ್ಲಿ ಎಂಬ ಅನುಮಾನ ಮೂಡುತ್ತದೆ.. ಏಕೆ ನಮ್ಮ ನೆಲದಲ್ಲಿ ನಡೆದಿಲ್ಲವೆ? ಬ್ರಿಟಿಷರಿಂದ ನಾವು ಕಡಿಮೆ ಅನುಭವಿಸಿದ್ದೇವೆಯೇ? ಅದೂ 20ನೇ ಶತಮಾನವೇ... ಆದರೆ, ನಡೆದಿದ್ದಕ್ಕೆ ಇತಿಹಾಸ ಸಾಕ್ಷಿ. ಈಗಲೂ ವ್ಯವಸ್ಥಿತವಾಗಿ ನಿಜದ ಇತಿಹಾಸವನ್ನು ಮರೆಮಾಚಲು ತೊಡಗಿದ್ದಾರೆ. ಇಂದಿನ ಪೀಳಿಗೆಗೆ ತಮ್ಮ ಹಿರಿಯರು ನಡೆಸಿದ ಕ್ರೌರ್ಯದ ಅರಿವಿಲ್ಲ. ಎಲ್ಲ ದೇಶದಲ್ಲಿ ಎಲ್ಲ ಕಾಲದಲ್ಲೂ ಒಬ್ಬ ಹಿಟ್ಲರ್ ಹುಟ್ಟಬಹುದು ಮತ್ತು ವ್ಯವಸ್ಥಿತವಾಗಿ ಒಂದು ಜನಾಂಗದ ನಾಶಕ್ಕೆ ಕಾರಣವಾಗಬಹುದು.ಬಹಳಷ್ಟು ವಿಷಯಗಳು ಈ ಪುಸ್ತಕದಿಂದ ತಿಳಿದವು. ಕೆಲವು ಪ್ರಶ್ನೆಗಳು ಸಹ ಮೂಡಿದವು. ಇತಿಹಾಸದ ಪುಟಗಳಲ್ಲಿ ಕೆಲವು ನೀಚ ಜನರ ಸ್ವಾರ್ಥದಿಂದ ಹಲವು ಮುಗ್ಧ ಮನಸುಗಳು ಚಿಗುರುವ ಮುನ್ನವೇ ನಶಿಸಿದವು. ಆದರೆ, ಐತಿಹಾಸಿಕ ಅತ್ಯಾಚಾರ ನಮ್ಮ ಮೇಲೆ ನಡೆದಿದೆ ಎಂಬ ಕಾರಣಕ್ಕೆ ಈಗಲೂ ಅದನ್ನೇ ಮತ್ತೆ ತಾವು ಬೇರೆಯವರ ಮೇಲೆ ಪ್ರಯೋಗಿಸಲು ಅರ್ಹತೆ ಬರುತ್ತದೆಯೇ? ಇತಿಹಾಸದ ಕರಾಳ ಪುಟಗಳನ್ನು ಮತ್ತೆ ಮರುಕಳಿಸದಂತೆ ಮಾನವೀಯತೆಯಿಂದ ಮುನ್ನಡೆದರಾಗದೆ? ಇತಿಹಾಸ ತಿಳಿದಿರಬೇಕು, ಆದರೆ ಅದೇ ಆದರ್ಶವಾಗಬೇಕೇ? ಚರಿತ್ರೆ ಯಾವತ್ತೂ ಶತ ಪ್ರತಿಶತ ಸತ್ಯವನ್ನೇ ಹೇಳಿದೆಯೆ? ಅವರವರ ನೋಟ (perspective) ವನ್ನು ಸಹ ಅದು ಹೊರುತ್ತದೆ ಅಲ್ಲವೇ?ನೆಮ್ಮದಿಯ ನಾಳೆಗಾಗಿ ಇಂದುಗಳ ಬಲಿ ಕೊಡುತ್ತಾ ಪವಿತ್ರ ಯುದ್ಧ, ಧರ್ಮದ ಹೆಸರಿನ ಕ್ರೌರ್ಯ ಎಲ್ಲಿಯವರೆಗೆ? ತಿಳಿಯದು..ಕೊನೆಗೆ ಪುಸ್ತಕ ಮುಗಿದಾಗ ಲೇಖಕರ ಕೆಲ ಅಭಿಪ್ರಾಯಗಳೊಂದಿಗೆ ಕೃತಿ ಮುಕ್ತಾಯಗೊಂಡರೂ ಸಹ ಸಾವಿರಾರು ಪ್ರಶ್ನೆಗಳು ಹಾಗೆಯೇ ಮೂಡಿ ನಿಂತು ಕಾಡುತ್ತವೆ.ಮನುಷ್ಯನನ್ನು ಕೇವಲ ಒಬ್ಬ ಮನುಷ್ಯನನ್ನಾಗಿ ನೋಡುವುದು ಬಹಳ ದೊಡ್ಡ ವಿಷಯ.. ಸುರಕ್ಷಿತ ದೇಶದಲ್ಲಿ ಬದುಕು ನಡೆಸುತ್ತಿರುವ ನಮಗೆ ಜಗತ್ತಿನಾದ್ಯಂತ ಹಿಂಸೆಗೆ ಒಳಗಾದವರ ನೋವು ಕೊಂಚವಾದರೂ ಅರಿವಿಗೆ ಬರುತ್ತದೆಯೇ? ಅಥವಾ ಎಲ್ಲವನ್ನು ಮತ್ತೆ ನಮ್ಮ ಬೌದ್ಧಿಕ ಜಾಢ್ಯದ, ಕೊಳೆತ ವಿಮರ್ಶೆಯ ಒರೆಗೆ ಹಚ್ಚಿ ನೋಡುತ್ತಾ ವಿಶ್ಲೇಷಿಸುತ್ತಾ ಕೂರುತ್ತೇವೆಯೆ? ಹಲವು ಪ್ರಶ್ನೆಗಳ ಮೂಟೆಯೊಂದಿಗೆ ಪುಸ್ತಕ ಮುಗಿದಿದೆ....
Sometimes u read and you tend to forget but sometimes without your knowledge you absorb and proliferate.. This book wasn't just a read... It was an unforgettable journey 🖤
One of the best books I've ever read and the one every human being should read. The author brings out the harsh reality of the second world war in a wonderful way.
ಯಹೂದಿಗಳ ಸಾಮೂಹಿಕ ಹತ್ಯಾಕಾಂಡ,ನಾಜಿ ಆಳ್ವಿಕೆಯ ಕರಾಳತೆ ಮುಖವನ್ನು ಲೇಖಕರು ಅನಾವರಣಗೊಳಿಸಿದ್ದಾರೆ!!
ಎಲ್ಲರೂ ಓದಬೇಕಾದ ಪುಸ್ತಕ..
ಸಾಕಷ್ಟು ಅಧ್ಯಯನ ಮತ್ತು ಸುತ್ತಾಟ ನಡೆಸಿ ಬರೆದಿರುವ ಈ ಕಾದಂಬರಿ, ಓದಿದ ಸಾಕಷ್ಟು ದಿನಗಳವರೆಗೆ ಕಾಡದೆ ಇರದು.. ನಿಜಕ್ಕೂ ಒಂದು ಒಳ್ಳೆಯ ಓದು..
#ಪುಸ್ತಕ_ಪಯಣ_೨೦೨೧
ಕೃತಿ:ಯಾದ್ ವಶೇಮ್
ಲೇಖಕರು: ನೇಮಿಚಂದ್ರ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಬೆಂಗಳೂರು
ಇದು ನಾನು ಓದಿದ ನೇಮಿಚಂದ್ರ ಅವರ ಪ್ರಥಮ ಕೃತಿ. ಲೇಖಕರ ವಿಭಿನ್ನ ನಿರೂಪಣಾ ಶೈಲಿ ಮೊದಲಿನಿಂದ ಕೊನೆಯವರೆಗೂ ಓದುಗರನ್ನು ಆಚೀಚೆ ಅಲುಗಾಡದಂತೆ ಹಿಡಿದಿಡುತ್ತದೆ. ಕಥೆಯ ಪಾತ್ರಗಳು ನಮ್ಮ ಕಣ್ಣಮುಂದೆ ನಡೆದಂತೆ ಭಾಸವಾಗಿ ನಾವು ಸಹ ಅಲ್ಲಿನ ಘಟನೆಗಳಿಗೆ ಸಾಕ್ಷಿಯಾದಂತೆ ಭಾಸವಾಗುತ್ತದೆ.
ಹಿಟ್ಲರ್…. ನಾಜಿಗಳು….. ಲಕ್ಷ ಲಕ್ಷ ಯಹೂದಿಯರ ಮಾರಣಹೋಮ….. ತಲೆತಲಾಂತರಗಳಿಂದ ನೆಲೆ ನಿಂತ ಜಾಗದಲ್ಲಿ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಅನಾಥರಾದವರು…..ಜೀವ ಉಳಿಸಿಕೊಳ್ಳಲು ಪರಿಪಾಟಲು ಪಟ್ಟ ಅಬಲೆಯರು, ವೃದ್ಧರು ಮತ್ತು ಪುಟ್ಟ ಪುಟ್��� ಕಂದಮ್ಮಗಳ ಅರಣ್ಯರೋದನ…… ಅರೆತುಂಬಿದ ಹೊಟ್ಟೆಯಲ್ಲಿ ನಾಜಿಗಳ ಕಾಮದಾಹಕ್ಕೆ ಬಲಿಯಾದ ಕಿಶೋರಿಯರು…. ವೈದ್ಯಕೀಯ ಪ್ರಯೋಗಗಳಿಗೆ ಬಲಿಯಾದ ಮುಗ್ಧರು….. ದುಡಿಯಲು ತ್ರಾಣವಿಲ್ಲದೇ ಗುಂಡು ಹೊಡೆಸಿಕೊಂಡು ಸತ್ತವರು…… ಇವಿಷ್ಟು ಒಂದು ಕಡೆ….
ನಾಜಿಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಹೆಸರು ಕೇಳದ ದೂರ ದೂರದ ದೇಶಗಳಿಗೆ ಪಲಾಯನಗೈದವರದ್ದು ಇನ್ನೊಂದು ವ್ಯಥೆ….. ತನ್ನ ಬಳಗದವರು ಏನಾದರೋ? ಮತ್ತೆ ತಮ್ಮ ಜೀವಿತಾವಧಿಯಲ್ಲಿ ಅವರನ್ನು ಸಂಧಿಸಬಹುದೇ? ಈ ಅಜ್ಞಾತವಾಸಕ್ಕೆ ಕೊನೆ ಯಾವಾಗ? ಎಂದು ಹಲುಬುವ ಬದುಕುಳಿದವರು….. ಜನಾಂಗೀಯ ದ್ವೇಷದಿಂದ ಮಾನವೀಯತೆಯ ಮೇಲೆ ಉಂಟಾದ ಗದಾಪ್ರಹಾರದ ಚಿತ್ರಣವನ್ನು ಪ್ರತಿಯೊಬ್ಬರ ಮನಮುಟ್ಟುವಂತೆ ಚಿತ್ರಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ…..ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಉಂಟಾದ ಅಲ್ಲೋಲಕಲ್ಲೋಲಗಳು ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ..
ಬೆಂಗಳೂರು, ಜರ್ಮನಿ,ನೆದರ್ಲ್ಯಾಂಡ್ಸ್ ಅಮೆರಿಕ ಮತ್ತು ಇಸ್ರೇಲ್ ದೇಶವನ್ನು ಸುತ್ತಿ ತನಗೆ ದೊರೆತ ಮಾಹಿತಿಗಳನ್ನು ಕಥೆಯ ರೂಪಕ್ಕೆ ಇಳಿಸಿದ ಲೇಖಕಿ ಅವರು ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಈ ಕೃತಿಯ ಮೂಲಕ ಪರಿಚಯಿಸುತ್ತಾರೆ.ಐತಿಹಾಸಿಕ ಘಟನೆಗಳ ದಿನಾಂಕವನ್ನು ಮತ್ತು ಪ್ರದೇಶಗಳ ಛಾಯಾಚಿತ್ರಗಳನ್ನು ಪುಸ್ತಕದಲ್ಲಿ ಸೇರಿಸಿರುವ ಕಾರಣ ಅಂದಿನ ಕಾಲದ ಪರಿಸ್ಥಿತಿಯನ್ನು ಊಹಿಸುವುದು ಸುಲಭವಾಗುತ್ತದೆ….
ಕೊನೆಯದಾಗಿ ಪುಸ್ತಕದಲ್ಲಿ ಹೇಳಿರುವಂತೆ "ಯುದ್ಧ ಹುಟ್ಟುವುದು ಗಡಿಯಲ್ಲಿ ಅಲ್ಲ…. ಮನುಷ್ಯನ ಹೃದಯದಲ್ಲಿ… ಅವನ ಅಹಂಕಾರದಲ್ಲಿ…."
ನಮಸ್ಕಾರ,
ಅಮಿತ್ ಕಾಮತ್
One of the rarest book in Kannada literature. The author has chosen a foreign story and set the plot to Indian nativity. She has done a lot of research and travelling before writing this book which has strengthened the novel.
The book is about a fictional Jewish family who have escaped from Europe during World war 2 era and got shelter in British India. It has lot of information about British time Bangalore, Jewish Holocaust, Nazis cruelties, Rise of Israel and conflicts with Palestine.
Hannah Moses, the protagonist takes you through many emotional rollercoaster. It's about life of Hannah who became Anita in India and her search for lost family.
The author has tried to convey the message about How War over the centuries has ruined the life of people while Peace and Coexistence are only the last answer to the ongoing conflicts.
The problem with the writing is author has used some phrases repetitively and could have been trimmed down this book. At some point it feels like she is dragging the story unnecessarily just convey some information to readers. Apart from that, one of the few books written about Jews and World war in Kannada literature which makes it special and a must read.
ಪುಸ್ತಕ: ಯಾದ್ ವಶೇಮ್
ಲೇಖಕರು: ನೇಮಿಚಂದ್ರ
ಯಹೂದಿಗಳ ಮೇಲೆ ಆದ ಅನ್ಯಾಯ ಮತ್ತು ನರಮೇಧದ ಮೇಲಿನ ಕಾದಂಬರಿ. ಪ್ರಸ್ತುತ ಪುಸ್ತಕದಲ್ಲಿ ಹ್ಯಾನಾ ಯಹೂದಿಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಸಮಯದಲ್ಲಿ ತನ್ನೂರನ್ನು ತೊರೆದು ಭಾರತವನ್ನು ಸೇರುತ್ತಾಳೆ. ಅಲ್ಲಿ ಭಾರತದ ಸಂಪ್ರದಾಯದ ಮೇಲೆ ಹಲವಾರು ಪ್ರಶ್ನೆಗಳು ಮೂಡುತ್ತವೆ. ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ದೊರಕುತ್ತವೆ, ಕೆಲವುಗಳಿಗಿಲ್ಲ. ಅಲ್ಲೇ ವಿವೇಕನ್ನು ವರಿಸಿ ಅವನ ಕುಟುಂಬದೊಂದಿಗೆ ಹೊಂದಿಕೊಂಡು ಆರಾಮಾಗಿರುತ್ತಾಳೆ. ಆದರೂ ತನ್ನೂರು, ದೇಶವನ್ನು ಯಾರಿಗೆ ತಾನೆ ಮರೆಯಲು ಸಾಧ್ಯ?! ಭಾರತದಲ್ಲಿದ್ದಾಗ ಪ್ರತಿ ಕ್ಷಣ ಕಳೆದುಕೊಂಡ ತನ್ನವರ ಬಗ್ಗೆ ಅವಳ ಹೃದಯ ಮಿಡಿಯುತ್ತಿರುತ್ತದೆ. ಮಗ ಹುಟ್ಟಿ ಅವನನ್ನು ಇಂಜಿನಿಯರನ್ನಾಗಿ ಮಾಡುತ್ತಾರೆ. ಅವಳಿಗೆ ಮಾತ್ರ ಒಂದು ಸಲ ತನ್ನ ಊರನ್ನು ನೋಡಬೇಕಾಗಿರುತ್ತದೆ. ಕೊನೆಗೆ ಮಗನ ಸಹಾಯದಿಂದ ಊರಿಗೆ ಭೇಟಿ ನೀಡಿದಾಗ ಅವಳಿಗೆ ಕಂಡಿದ್ದು ಬದಲಾದ ಊರು, ಮಾಸಿದ ಅದರ ಬಣ್ಣ. ಅಲ್ಲಿ ಹೇಗೋ ಅವಳ ಅಕ್ಕನನ್ನು ಕಾಣುತ್ತಾಳೆ. ಭೇಟಿಯಾಗಿ ತನ್ನ ಜೀವನ ಇಂದು ಸಫಲವಾಯಿತು ಅಂತ ತಿಳಿಯುತ್ತಾಳೆ. ಅಲ್ಲಿಂದ ಅಮೇರಿಕಾ, ಜೆರುಸಲೇಮ್ ತಿರುಗಿ ಯಹೂದಿಗಳ ಮೇಲೆ ಉಂಟಾದ ಹಲ್ಲೆ, ಅವರ ಮೇಲೆ ನಡೆಸಿದ ಎಷ್ಟೋ ಪರೀಕ್ಷೆಗಳು ಮತ್ತು ಅತ್ಯಾಚಾರಗಳ ಬಗ್ಗೆ ಓದಿದಾಗ ಹೃದಯ ಹಿಂಡುತ್ತದೆ.
ಕಳೆದುಕೊಂಡ ತನ್ನವರನ್ನು ಅರ್ಧ ಶತಮಾನದ ನಂತರ ಹುಡುಕಲು ಹೊರಟ ಅನಿತ (ಹ್ಯಾನಾ), ಬದುಕನ್ನೇ ಕಳೆದುಕೊಂಡ ಯಹೂದಿಗಳ ಚರಿತ್ರೆಯನ್ನು ಓದುಗರ ಮುಂದಿಡುತ್ತಾ ಸಾಗುವುದೇ "ಯಾದ್ ವಶೇಮ್".
ಚಾಮರಾಜಪೇಟೆಯಿಂದ ಶುರುವಾಗುವ ಕಥನ ಜರ್ಮನಿ, ಅಮೆರಿಕ, ಇಸ್ರೇಲ್ ದೇಶಗಳೆಲ್ಲಾ ಸಾಗಿ ಚಾಮರಾಜಪೇಟೆಯಲ್ಲೇ ಕೊನೆಗೊಳ್ಳುತ್ತದೆ.
ಜನಾಂಗೀಯ ದ್ವೇಷದ ಅಮಲೇರಿಸಿಕೊಂಡ ನರಹಂತಕ ಸರ್ವಾಧಿಕಾರಿ ಹಿಟ್ಲರ್ ಎಂಬ ಅಂಡೆಪಿರ್ಕಿ ಇಡಿ ಯಹೂದಿ ಜನಾಂಗವನ್ನು ನಾಶ ಮಾಡಲು ನಡೆಸಿದ ಅತ್ಯಾಚಾರ ಅನಾಚಾರಗಳನ್ನು ಓದುತ್ತಾ ಹೋದಂತೆ, ಹೀಗೆಲ್ಲಾ ಮಾಡಿರಲು, ಆಗಿರಲು ಸಾಧ್ಯವೇ!? ಎಂದೆನಿಸುತ್ತದೆ.
ಇಂತಹ ದ್ವೇಷದ ದಳ್ಳುರಿಯಲ್ಲಿ ಬೆಂದ ಯಹೂದಿಗಳು ಜೀವ ಉಳಿಸಿಕೊಳ್ಳಲು ತಮ್ಮ ದೇಶವನ್ನು ತೊರೆದು ಜಗತ್ತಿನಾದ್ಯಂತ ಪಸರಿಸಿದರು. ಹೀಗೆ ಪಸರಿಸಿದವರಲ್ಲಿ ಸುಮಾರು ಜನ ಭಾರತದಲ್ಲಿ ಬಂದು ನೆಲೆಸಿದರು.
ಅದರಲ್ಲಿ ಬಂದ ಯಹೂದಿ ವಿಜ್ಞಾನಿಯೊಬ್ಬರ ಬಗ್ಗೆ ತಿಳಿದು ಮತ್ತು ಗೋರಿಪಾಳ್ಯದಲ್ಲಿರುವ ಯಹೂದಿಗಳ ರುದ್ರಭೂಮಿ ಇಂದ ಸ್ಪೂರ್ತಿಗೊಂಡು ಈ ಕೃತಿಯನ್ನು ಪ್ರಸ್ತುತಪಡಿಸಿದ್ದಾರೆ ಲೇಖಕರು.
ಈ ಕೃತಿಯ ಹೈಲೈಟ್ ಎಂದರೆ ಕಾಲಘಟ್ಟವನ್ನು ಕಟ್ಟಿಕೊಟ್ಟಿರುವ ರೀತಿ. 30-40 ರ ದಶಕದ ಬೆಂಗಳೂರಿನ ಸೊಬಗನ್ನು, ನರಕಯಾತನೆಯ ನಾಜಿ ಕ್ಯಾಂಪ್ ಗಳನ್ನ ಚಿತ್ರಿಸಿರುವ ರೀತಿ ಅನನ್ಯವಾದುದು.
ಪ್ರತಿಯೊಂದು ಘಟನೆಗೆ ತಕ್ಕನಾದ ಚಿತ್ರಿಕೆಗಳನ್ನು ಕೊಟ್ಟಿರುವುದು ತುಂಬಾ ಚೆನ್ನಾಗಿದೆ.
ಇಸ್ರೇಲ್ ಪ್ಯಾಲೇಸ್ತೀನಿ ನಡುವಿನ ತಿಕ್ಕಾಟ, ಭಾರತೀಯ ಸಂಸ್ಕೃತಿ, ಯಹೂದಿಯರ ಸಂಸ್ಕೃತಿಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಕೊನೆಯ ಕೆಲವು ಪುಟಗಳು ತುಂಬಾ preachy ಅನಿಸುತ್ತವೆ ಎಂಬುದು ಸಣ್ಣ ಕೊಸರು ನನ್ನದು.
ಈ ಕಥನ ಅವರಲ್ಲಿ ಹೊಳೆದದ್ದು, ಅದಕ್ಕಾಗಿ ಅವರು ಮಾಡಿದ ಟಿಪ್ಪಣಿಗಳು, ಪ್ರವಾಸಗಳು, ಭೇಟಿಯಾದ ವ್ಯಕ್ತಿಗಳು ಬಗ್ಗೆ ಇರುವ ಅಧ್ಯಾಯ ಮನನೀಯ.
ಒಟ್ಟಿನಲ್ಲಿ ಖಂಡಿತ ಓದಬೇಕಾದ ಕೃತಿಗಳಲ್ಲಿ ಇದು ಒಂದು. ಉತ್ತಮ ಕೃತಿ.❤️
ಇಸ್ರೇಲ್ ನ್ನ ಜಗಳಗಂಟ ದೇಶ ಅಂತಾರೆ.ಸುಮ್ಮನೆ ಕಾಲುಕೆರೆದುಕೊಂಡು ಜಗಳಕ್ಕೆ ನಿಲ್ಲೋ ದೇಶ ಅಂತಲೂ ಕರೆಯೋದುಂಟು.ಆದರೆ ಅದು ಹಾಗಾಗೋಕೆ ಕಾರಣ ಏನು ಅಂತ ತಿಳ್ಕೋಬೇಕಾದ್ರೆ `ನೇಮಿಚಂದ್ರ´ರ `ಯಾದ್ ವಶೇಂ' ಓದಬೇಕು.
ಹ್ಯಾನಾ, ಅವಳ ಅಪ್ಪ,ಅಮ್ಮ,ಅಕ್ಕ,ತಮ್ಮ ಹೀಗೆ ಸಂತೋಷದಿಂದ ಕೂಡಿದ್ದ ಯಹೂದಿ ಕುಟುಂಬ ಅದು.ಮೂರು ತಲೆಮಾರುಗಳಿಂದ ಜರ್ಮನಿಯಲ್ಲಿ ನೆಲೆಸಿದ್ದರು ಹ್ಯಾನಾಳ ಪೂರ್ವಿಕರು.ಹ್ಯಾನಾಳ ಅಪ್ಪ ವಿಜ್ಞಾನಿ ಎಲ್ಲ ಮಕ್ಕಳಂತೆ ಆನಂದವಾಗಿ ನೆಮ್ಮದಿಯಿಂದ ಸಾಗಿತ್ತು ಹ್ಯಾನಾಳ ಬದುಕು.
ಹಿಟ್ಲರ್ ಅಧಿಕಾರಕ್ಕೇರಿದ,ನಾಜಿಗಳ ಪಡೆಯನ್ನ ಕಟ್ಟಿದ.ದುರ್ಬರವಾಗುತ್ತಾ ಸಾಗಿತ್ತು ಯಹೂದಿಗಳ ಜೀವನ.ಎಲ್ಲಂದರಲ್ಲಿ ಸಾವು ನೋವು ಶುರುವಾಗತ್ತೆ.
ಹ್ಯಾನಾಳ ಕುಟುಂಬ ತನ್ನ ಬೇರನ್ನ ಬಲವಂತವಾಗಿ ಕತ್ತರಿಸಿಕೊಂಡು ಸಾಗಿದ್ದು ಆಮ್ ಸ್ಟರ್ ಡ್ಯಾಮ್ ಗೆ ಅಲ್ಲಿ ಒಂದೆರೆಡು ವರ್ಷಗಳ ನಿರಾತಂಕ ಬದುಕು ಸಾಗತ್ತೆ.ಆದರೆ ಅಲ್ಲೂ ಕಾಲಿಡ್ತಾನೆ ಹಿಟ್ಲರ್ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕ್ತಿದ್ದ ಹ್ಯಾನಾಳ ಕುಟುಂಬಕ್ಕೆ ಒಂದು ರಾತ್ರಿ ಜವರಾಯನ ದರ್ಶನವಾಗತ್ತೆ ನಾಳೆ ಮನೆಯವರೆಲ್ಲ ಕ್ಯಾಂಪಿಗೆ ಬರಬೇಕೆನ್ನೋ ಆದೇಶ.ಉಟ್ಟ ಬಟ್ಟೆಯಲ್ಲೇ ಮನೆ ಬಿಡೋಕೆ ಸಿದ್ದವಾಗ್ತಾರೆ.ಅನುಮಾನ ಬಾರದಿರಲಿ ಅಂತ ಹ್ಯಾನಾ ಅವಳ ಅಪ್ಪ ಮುಂದೆ ಹೋಗಿ ಮರೆಯಲ್ಲಿ ಕಾದಿರ್ತಾರೆ.ಮನೆಯಿಂದ ಹೊರಬಂದ ಹ್ಯಾನಾಳ ಅಮ್ಮ ಅಕ್ಕ ಪುಟ್ಟ ತಮ್ಮನನ್ನ ಅಡ್ಡಗಟ್ಟಿದ್ದು ನಾಜಿಗಳು.ಹ್ಯಾನಾ ನೋಡ್ತಿದ್ದ ಹಾಗೇ ಅವಳ ಅಮ್ಮ ಅಕ್ಕ ತಮ್ಮನನ್ನ ಜೀಪಿನಲ್ಲಿ ತುಂಬಿಕೊಂಡು ಹೋಗ್ತಾರೆ.ನಾಜಿಗಳ ಸಂಪರ್ಕವೇ ಇಲ್ಲದ ಕಡೆಗೆ ಹೋಗಬೇಕು ಅಂತ ಅವಳಪ್ಪ ಹ್ಯಾನಾಳನ್ನ ಕರೆತಂದದ್ದು ಭಾರತಕ್ಕೆ.
ತಾಯಿಯನ್ನ ತಾಯ್ನಾಡನ್ನ ಬಿಟ್ಟುಬಂದ ಹ್ಯಾನಾಳಿಗೆ ನೆರೆಮನೆಯವರಾಗಿ ದೊರೆತದ್ದು ವಿವೇಕ್ ಕುಟುಂಬ.ವಿವೇಕ್ ಅಮ್ಮನಂತೂ ನನ್ನ ಇಷ್ಟು ಮಕ್ಕಳ ಜೊತೆ ಇದೂ ನನ್ನ ಮಗುವೇ ಅಂತ ಭಾವಿಸೋ 'ಅಮ್ಮ'.ಹೊಸ ಜಾಗಕ್ಕೆ ಹೊಂದಿಕೊಳ್ತಾ ಯುದ್ದ ಮುಗಿದ ಕೂಡಲೇ ಅಮ್ಮನನ್ನ ಹುಡುಕಿ ಹೋಗೋ ನಿರೀಕ್ಷಿಸಯಲ್ಲಿದ್ದವಳಿಗೆ ಅಪ್ಪನ ಸಾವು ದೊಡ್ಡ ಆಘಾತ.ವಿವೇಕ್ ಅಮ್ಮ ಮಗಳಂತೆಯೇ ಹ್ಯಾನಾಳನ್ನ ಸಾಕ್ತಾರೆ ವಿವೇಕ್ ಜೊತೆ ಮದುವೆಯೂ ಆಗತ್ತೆ.ಹ್ಯಾನಾ ಅನಿತಾ ಆಗ್ತಾಳೆ.
ಆದರೆ ಅವಳ ಬೇರಿನ ಸೆಳೆತ ಪ್ರತಿನಿತ್ಯ ಅವಳನ್ನ ಕಾಡತ್ತೆ.ಅಮ್ಮ ಅಕ್ಕನ ಯೋಚನೆ ಅವರೇನಾದ್ರು ಅಂತ ತಿಳಿದುಕೊಳ್ಳೋ ತವಕ.ಮಗ ದೊಡ್ಡವನಾಗಿ ವಿದೇಶಕ್ಕೆ ಹೋಗೋ ಆರ್ಥಿಕ ಶಕ್ತಿ ಕೂಡಿದಾಗ ವಿವೇಕ್ ಅನಿತಾ ಮೊದಲು ಹೋಗಿದ್ದು ತನ್ನವರನ್ನ ಇರಿಸಿದ್ದ ಡಕಾವ್ ಕ್ಯಾಂಪ್ಗೆ. ಅಲ್ಲಿ ಯಾವ ಸುಳಿವೂ ಸಿಗದೆ ನಂತರ ನಡೆದಿದ್ದು ಅಮೇರಿಕಾ ಕೊನೆಗೆ ಇಸ್ರೇಲ್.ಅನಿತಾಳ ಅಮ್ಮ ತಮ್ಮ ಹುತಾತ್ಮರಾದದ್ದು ತಿಳಿಯತ್ತೆ.ಅಕ್ಕ ಸಿಕ್ಕು ತನ್ನ ಭೀಕರ ಕತೆಯನ್ನ ಹೇಳ್ತಾಳೆ.
ನಾಜಿಗಳು ನಡೆಸಿದ ಕ್ರೌರ್ಯವನ್ನ ಓದ್ತಿದ್ರೆ ಮೈ ಮರಗಟ್ಟತ್ತೆ.ಮನುಷ್ಯ ಮತ್ತೊಬ್ಬ ಮನುಷ್ಯನೆಡೆಗೆ ಅದ್ಹೇಗೆ ಅಷ್ಟು ಕ್ರೂರತೆಯಿಂದ ನಡೆದುಕೊಳ್ಳಬಲ್ಲ ಅಂತ ಬೆಚ್ಚುವ ಹಾಗಾಗತ್ತೆ. ಗ್ಯಾಸ್ ಛೇಂಬರ್ಗಳು,ನಿರಂತರವಾಗಿ ಉರಿಯುತ್ತಲೇ ಚಿತಾಗಾರ,ವೈದ್ಯಕೀಯ ಪ್ರಯೋಗಗಳಿಗೆ ಬಲಿಯಾಗುತ್ತಿದ್ದ ಅಮಾಯಕರು,ಪ್ರತಿದಿನ ತುಂಡುಬ್ರೆಡ್ಡಿನ ಊಟ,ಅತ್ಯಾಚಾರ ಮಾನವನ ಕ್ರೂರತೆಯ ಪರಾಕಾಷ್ಟೆ ಈ ಕ್ಯಾಂಪ್ ಗಳು.ಎಷ್ಟೋ ಕಡೆ ಇನ್ನು ಓದಲಾರೆ ಅನ್ನಿಸಿ ಕೆಳಗಿಟ್ಟರೂ ಮತ್ತೆ ಒದೋಕೆ ಶುರು ಮಾಡಿ ಕಣ್ಣಂಚಲ್ಲಿ ನೀರು ತರಿಸಿದ ಪುಸ್ತಕ.
Holocaust ಬಗ್ಗೆ ತಿಳಿದಿದ್ದರೂ, ಕೂಲಂಕಷವಾಗಿ ಓದಿರಲಿಲ್ಲ. ನೇಮಿಚಂದ್ರರವರ ಯಾದ್ ವಶೇಮ್ ಮೂಲಕ ಅಚ್ಚ ಕನ್ನಡದಲ್ಲಿಯೇ ಹಿಟ್ಲರ್ ನಡೆಸಿದ ಯಾಹೂದಿ ಹತ್ಯಾಕಾಂಡದ ಜೊತೆಗೆ ವಿಶ್ವಯುದ್ಧ, ಇಸ್ರೇಲ್, ಪ್ಯಾಲೆಸ್ಟೈನ್, ಜೆರುಸಲೇಂ, ಯಹೂದಿ ಧರ್ಮ (ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಸಹ) ಎಲ್ಲವನ್ನೂ ಈ ಕೃತಿಯ ಮೂಲಕ ಕಾದಂಬರಿಯಾಗಷ್ಟಲ್ಲದೆ ಒಂದು ಇತಿಹಾಸದ ಪುಸ್ತಕವಾಗಿ, ಪ್ರವಾಸ ಕಥನವಾಗಿ ಓದುವ ಅವಕಾಶ ದೊರೆಯಿತು.
ಒಂದು ದಶಕಕ್ಕೂ ಮಿಗಿಲಾಗಿ ಅಧ್ಯಯನ ಮತ್ತು ಪರ್ಯಟನೆಯನ್ನು ನಡೆಸಿ ಇಂತಹ ಅದ್ಭುತ ಕೃತಿಯನ್ನು ಕನ್ನಡಿಗರಿಗೆ ನೀಡಿರುವ ನೇಮಿಚಂದ್ರರವರಿಗೆ ಅನಂತ ಕೃತಜ್ಞತೆಗಳು.
ನಮ್ಮ ಕರಾವಳಿಯಲ್ಲಿಯೇ ಧರ್ಮದ ಹೆಸರಿನಲ್ಲಿ ಎಳೆಯರ ಮನದಲ್ಲಿ ಗೋಡೆ ಎಬ್ಬಿಸುತ್ತಿರುವ ಪ್ರಸ್ತುತ ಸನ್ನಿವೇಶಕ್ಕೆ ಈ ಕೃತಿಯ ಆಶಯವೇ ಕೈ ಹಿಡಿಯಲಿ - "ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ, ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್ ನನ್ನು ತಡೆಹಿಡಿವ ಹೊಣೆ ನಮ್ಮದು"
P. S. : Clubhouse ಚರ್ಚೆಯೊಂದರಲ್ಲಿ ಈ ಪುಸ್ತಕದ ಬಗ್ಗೆ ತಿಳಿಸಿದ ನಯಾಜ್ ಅವರಿಗೆ ಧನ್ಯವಾದಗಳು
ಯಹೂದಿಗಳ ಬಗ್ಗೆ, ಮಹಾಯುದ್ದದ ಕರಾಳ ಛಾಯೆಗಳ ಬಗ್ಗೆ ಇಂಗ್ಲೀಷ್ನಲ್ಲಿ ಹಲವು ಪುಸ್ತಕ ಓದಿದ್ದೆನಾದರು, ಭಾರತದ ನೆಲದಲ್ಲಿ ಹುಟ್ಟಿದ ಈ ಕನ್ನಡದ ಕತೆಯ ಆಪ್ತತೆಹೆಚ್ಚು. ನೇಮಿಚಂದ್ರರವರು ನನ್ನ ನೆಚ್ಚಿನ ಲೇಖಕಿ. ಅವರು ಈ ಕಾದಂಬರಿಗೆ ಮಾಡಿದ ಅದ್ಯಯನ, ಪೂರ್ವ ಸಿದ್ದತೆ ಎಷ್ಟಿದೆಯೆಂದರೆ ಯುದ್ಧ, ಧರ್ಮ ಇವುಗಳ ಕುರಿತಾದ 100 ಪುಸ್ತಕ ಓದುವುದ್ದಕ್ಕೆ ಈ ಒಂದು ಪುಸ್ತಕ ಸಮನಾಗುತ್ತದೆ. ಬೆಂಗಳೂರಿನ ನೆನಪಿನ ಚಿತ್ರಣ, ಕತೆ ಸಾಗಿದ ರೀತಿ ಅದರ ಜೊತೆ ಮಿಳಿತವಾದ ರಾಶಿ ರಾಶಿ ಮಾಹಿತಿ , ಯುದ್ಧದ ಕರಾಳ ಮುಖದ ದರ್ಶನ, ಪ್ರಸ್ತುತ ರಾಜನೀತಿ ತಂತ್ರಗಾರಿಕೆಗಳ ಚಿತ್ರಣ ಮುಂದಿನ ಪೀಳಿಗೆಯಲ್ಲಾದರು ಶಾಂತಿ ಸೌಹಾರ್ದ ನೆಲಸಲೆಂಬ ಆಶಯ ಒಟ್ಟಾರೆ ಸಂಪೂರ್ಣ ಓದು. ಇದು ಓದಿ ಮರೆವ ಕತೆಯಲ್ಲ, ಮಕ್ಕಳಿಗೆ ಹೇಳ ಬೇಕಾದ ಕತೆ. ಶಾಂತಿ ಕಾಪಾಡುವಲ್ಲಿ ನಮ್ಮ ಕರ್ತವ್ಯ-ಬದ್ದತೆ ನೆನಪಿಸುವ ಕತೆ.
'ಯುದ್ಧದಲ್ಲಿ ಯಾರು ಗೆಲ್ಲಲ್ಲ'.
' ಯುದ್ಧಗಳು ಅಲ್ಲಿ ಹೊರಗಿಲ್ಲ. ಕದನಗಳು ಹುಟ್ಟುತ್ತವೆ ಎದೆಯ ಗೂಡಲ್ಲಿ. ಇಲ್ಲಿ ಮೊದಲು ಶಾಂತಿಯ ಬೆಳಕು ಬೇಕು, ಎದೆಯ ಕತ್ತಲ ಮೂಲೆಗಳಲ್ಲಿ '.
' ದೇವ್ರು ಅಂದ್ರೇನು ಮಗ, ಎಲ್ಲವೂ ಪರಮಾತ್ಮನ ಅಂಸನೆ ಅಲ್ವಾ? ಜೀವ ಇರೋ ಯಾವುದನ್ನು ನೋಯಿಸಬಾರದು '.
ಈ ಮೇಲಿನ ಸಾಲುಗಳು ಪುಸ್ತಕದಲ್ಲಿ ನಂಗೆ ಇಷ್ಟವಾದ ಕೆಲವು. ಇನ್ನು ಹಲವು ಇವೆ ಇಂಥದ್ದು.
ಒಂದು ಅದ್ಭುತ ಪುಸ್ತಕ. ಜಾತೀಯತೆಯನ್ನು ಮೀರಿ ನಿಲ್ಲುತ್ತದೆ ಮನುಷ್ಯತ್ವ.
ಅದಿಲ್ಲ ಇದಿಲ್ಲ ಎಂದು ಕೊರಗುವ ಮನುಷ್ಯ, ಇರುವುದಕ್ಕೆ ಕೃತಜ್ಞ ಆದ್ರೆ ಬದುಕು ಎಷ್ಟು ಸುಂದರ.
ವಿದ್ಯಾವಂತ ಆದ ಮಾತ್ರಕ್ಕೆ ಮನುಷ್ಯ ಅಲ್ಲ. Infact ಎಷ್ಟೋ ಬಾರಿ(ಹೆಚ್ಚಿನ ಬಾರಿ) ವಿದ್ಯೆ ಇಲ್ಲದವರೆ, ಜೀವನದ ಅತಿ ಕ್ಲಿಷ್ಟ ಪಾಠಗಳನ್ನು ಬಹಳ ಬೇಗ ಕಲಿತಾರೆ.
ಈ ಕಥೆಯಲ್ಲಿ ಬರುವಂತಹ ಗುಂಡಮ್ಮ ನಮ್ಮ ಸುತ್ತ ಮುತ್ತ ಹುಡುಕಿ ತೆಗೆದಂತಹ ಪಾತ್ರ. ಜಗತ್ತಿನ ಎಲ್ಲರೂ ಗುಂಡಮ್ಮ ನ ತರ ಯೋಚಿಸಿದರೆ, ಈ ಜಗತ್ತಲ್ಲಿ ಯುದ್ದ, ಜಾತಿ ಕಲಹ ಎಲ್ಲಾ ಇರೋದೇ ಇಲ್ವೇನೋ.
ಯಹೂದಿ, ಪ್ಯಾಲೆಸ್ಟೈನ್, ಇಸ್ರೇಲ್, ಹಿಟ್ಲರ್, ನಾಝಿಗಳು, ನಾಝಿ ಕ್ಯಾಂಪ್, ಬೆಂಗಳೂರಲ್ಲಿ ಯಹೂದಿಗಳು ಈ ಎಲ್ಲಾ ವಿಷಯಗಳ ವಾಸ್ತವ ವಿಚಾರ ಇಟ್ಟುಕೊಂಡು ಹೆಣೆದ ಒಂದು ಕಾಲ್ಪನಿಕ ಕಾದಂಬರಿ ಈ ಯಾದ್ ವಶೇಮ್.
ಬಹಳ ಚೆನ್ನಾಗಿದೆ.
ಕನ್ನಡದ ಅತಿ ಅಪರೂಪದ ಪುಸ್ತಕವಿದು. ಒಮ್ಮೆ ಓದಿದರೆ ಎಂದಿಗೂ ಮರೆಯಲಾಗದಂತಹ ವಸ್ತು. ಬೆಂಗಳೂರಿನ ಚಾಮರಾಜ ಪೇಟೆಯಿಂದ, ಜರ್ಮನಿ, ಇಸ್ರೇಲ್, ಅಮೆರಿಕ ಎಲ್ಲೆಡೆಯು ಸುತ್ತಿಸಿ, ದೇಶ, ಭಾಷೆ, ಜಾತಿ, ಧರ್ಮ, ಸಂಸ್ಕೃತಿ, ಈ ಎಲ್ಲವನ್ನೂ ಮೀರಿದುದು ಮಾನವತೆ ಎಂದು ಹೇಳುವ ಕಥೆಗಾರ್ತಿ, ಇದರಲ್ಲಿ ತೋರಿರುವ ವಸ್ತುನಿಷ್ಠೆ ಅಷ್ಟಿಷ್ಟಲ್ಲ. ಈ ಕಥೆಯ ಹಿರಿಮೆಯನ್ನು ಹೇಳುವುದು ಅಸಾಧ್ಯ. ಖಂಡಿತ ಓದಲೇ ಬೇಕಾದ ಪುಸ್ತಕ.
Yaad Vashem is this book by one of the Kannada literature's excellent writers Nemichandra which depicts the holocaust on Jews. Nemichandra is this author who goes right into the places on which she writes, feels the history and culture and helps you feel the same.
Under the fear of Nazi terror, Hanna and her father flee to Bangalore where they're accepted by a local family. Years later, when Hannah's father demises Hannah comes under the guardianship of the Hindu family that gave them shelter.
Decades later, Hannah, now Anita, begins to feel the tugging of yearning for her homeland, Germany. When she finally sets her foot on the very land she fled from with terror she gets slammed with nostalgia.
Fortunately, she meets her long lost sister Rebecca who was taken to one of the camps and the way she recounts what happened there still set my eyes teary.
Through Hannah and her husband Vivek's explore Nemichandra details us about the history and culture of the Jews and the hardship they went through.
ಹಿಟ್ಲರ್ ನಡೆಸಿದ ಯಹೂದಿಗಳ ಹತ್ಯಾಕಾಂಡವನ್ನು ತಿಳಿಯಲು ನಾನು ಅನೇಕ ಪುಸ್ತಕಗಳನ್ನು ಓದಿದ್ದೇನೆ. ಅಲ್ಲಿನ ದುರಂತ ಇತಿಹಾಸವನ್ನು ತಿಳಿದು ��ನುಜನ ವಿಕೃತ ರೂಪದ ಪರಿಚಯ ಪಡೆದಿದ್ದೇನೆ. ಆದರೆ ತಿಳಿದಷ್ಟು ಹಸಿವು ಹೆಚ್ಚಿಸುವ ಈ ಇತಿಹಾಸದ ಬಗ್ಗೆ ನನ್ನ ದೇಶದಲ್ಲೇ, ನನ್ನ ಭಾಷೆಯಲ್ಲೇ ಇರುವ ಪುಸ್ತಕವನ್ನು ಓದದೇ ಮೂರ್ಖನಾಗಿದ್ದೆ.
ಸಹಸ್ರಾರು ಯಹೂದಿಗಳನ್ನು ಸೆರೆಶಿಬಿರದಲ್ಲಿಟ್ಟು ವಿಷ-ಅನಿಲದಿಂದ ಕೊಲ್ಲಲ್ಪಡಲಾಯಿತು ಎಂಬುದಷ್ಟೇ ಸತ್ಯ ಅಲ್ಲ, ಅಲ್ಲಿನ ಅಧಿಕಾರಿಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ, ತುಂಡು ಬ್ರೆಡ್ಡಿಗಾಗಿ ಕೊಲೆಗಳು, ಕಷ್ಟ ಸಹಿಸಲಾಗದೆ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಳ್ಳುವ ದಾರುಣ ಸ್ಥಿತಿಗಳು ಸರ್ವೆ ಸಾಮಾನ್ಯವಾಗಿದ್ದವು. ಇದಲ್ಲದೇ ಅನೇಕ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಅಧ್ಯಯನಗಳಿಗೋಸ್ಕರ ಅಲ್ಲಿನ ಯಹೂದಿಗಳನ್ನು ಕ್ರೂರ ರೂಪದಲ್ಲಿ ಉಪಯೋಗಿಸಲಾಯಿತು. ಇವನ್ನೆಲ್ಲ ಓದಿದಾಗ ಯಹೂದಿಗಳ ಕ್ರೂರ ಇತಿಹಾಸಕ್ಕೆ ಹಿಟ್ಲರ್ ಒಬ್ಬನೇ ಕಾರಣಕರ್ತನಲ್ಲದಿರಬಹುದು, ಅವನ ಹುಚ್ಚಾಟವನ್ನು ಮೌನದಿಂದ ಒಪ್ಪಿಕೊಂಡ ನಾವೆಲ್ಲರೂ ಕಾರಣಕರ್ತರೇ.
ಯಹೂದಿಗಳ ರುದ್ರಭೂಮಿಯೊಂದು ಬೆಂಗಳೂರಿನ ಗೊರಿಪಾಳ್ಯದಲ್ಲಿದೆ. ಇದನ್ನು ಕಂಡ ಲೇಖಕರಿಗೆ ಕಾದಂಬರಿಯ ಮೊಳಕೆ ಚಿಗುರಿದೆ. ಚಿಗುರಿದ ತಕ್ಷಣ ಅವರಸದಲ್ಲಿ ಏನೋ ಬರೆದು ಮುಗಿಸುವ ದಾವಂತ ಮಾಡದೇ, ಯಹೂದಿಗಳ ಇತಿಹಾಸ, ಅವರ ಧರ್ಮ, ಮಹಾಯುದ್ಧಗಳ ಇತಿಹಾಸವನ್ನೆಲ್ಲ ಅಚ್ಚುಕಟ್ಟಾಗಿ ಓದಿ, ಅಭ್ಯಾಸ ಮಾಡಿ, ಸ್ವತಃ ಅಲ್ಲಿನ ಜಾಗಗಳಿಗೆ ಭೇಟಿ ಕೊಟ್ಟು ಕಾದಂಬರಿಯ ವಸ್ತುವಿಗೆ ನ್ಯಾಯ ಒದಗಿಸಿದ್ದಾರೆ.
ಶುದ್ಧ ಸಾಮಾಜಿಕ ಕಾದಂಬರಿಗಳನ್ನು ಓದುವ ಓದುಗರಿಗೆ ಇದು ಸಹ್ಯವಾಗದೆ ಇರಬಹುದು. ಶುದ್ಧ ಇತಿಹಾಸ ಪುಸ್ತಕಗಳನ್ನು ಓದುವವರಿಗೂ ಇದು ಇಷ್ಟವಾಗದಿರಬಹುದು. ಆದರೆ ಪ್ರತಿಯೊಬ್ಬ ಗಂಭೀರ ಓದುಗ ಓದಲೇಬೇಕಾದ ಪುಸ್ತಕವಿದು. ಈ ಒಂದು ಪುಸ್ತಕ ಓದಿ ನನಗಂತೂ ಒಂದು 10 ಪುಸ್ತಕ ಓದಿದಷ್ಟೆ ಅನುಭವವಾಯಿತು. ನೀರಸ ಬರವಣಿಗೆಯಾಗಿ ಅಲ್ಲ, ಅಷ್ಟೂ ವಿಷಯಗಳು ಒಂದೇ ಪುಸ್ತಕದಲ್ಲಿದೆ ಎಂಬ ಅರ್ಥದಲ್ಲಿ.
ಕಥೆಯ ಎಳೆ ಇಷ್ಟೇ - ಕಥಾ ನಾಯಕಿ ಯಹೂದಿ, ಜರ್ಮನಿಯ ಅಧಿಕಾರಿಗಳಿಂದ ಅದೃಷ್ಟವಶ ತಪ್ಪಿಸಿಕೊಂಡು ತಂದೆಯ ಜೊತೆಗೂಡಿ ಅಮ್ಮ, ಅಕ್ಕ ಮತ್ತು ತಮ್ಮನಿಂದ ದೂರವಾಗಿ ಭಾರತಕ್ಕೆ ಬರುತ್ತಾಳೆ. ಇಲ್ಲಿ ಬಂದು ಕೆಲವು ವರ್ಷಗಳಲ್ಲಿ ದೀರ್ಘ ಅಧ್ಯಯನ ಮಾಡಿ ತನ್ನ ಅಮ್ಮ, ಅಕ್ಕ ಮತ್ತು ತಮ್ಮನನ್ನು ಹುಡುಕುತ್ತ ಹೋಗುತ್ತಾಳೆ. ಹುಡುಕುವ ಜೊತೆಯಲ್ಲಿ ನಮಗೆ ಜರ್ಮನಿಯ, ಭಾರತೀಯ, ಇಸ್ರೇಲ್ ದೇಶದ, ಹಲವು ಧರ್ಮಗಳ ಇತಿಹಾಸವನ್ನು ಎಳೆ ಎಳೆಯಾಗಿ ಹೇಳುತ್ತಾ ಹೋಗುತ್ತಾಳೆ. ಹುಡುಕಿಕೊಂಡು ಹೋದ ನಾಯಕಿಗೆ ಏನು ಸಿಕ್ಕಿತು ಎಂಬುದನ್ನು ನೀವು ಓದಿಯೇ ಸವಿಯೇಬೇಕು.
ಕಾದಂಬರಿ ಹೇಳುವ ಸಂದೇಶ ಪ್ರಸ್ತುತ ಸ್ಥಿತಿಗೆ ಪೂರಕವಾಗಿದೆ. ನಮ್ಮಲ್ಲೂ ಹಿಟ್ಲರ್ ಇದ್ದಾನೆ. ನಾವು ಅವನನ್ನು ಪೋಷಿಸದೆ ಅವನನ್ನು ನಮ್ಮಲ್ಲೇ ದಹನ ಮಾಡಿದರೆ ಮಾತ್ರ ಮತ್ತೊಂದು ಹತ್ಯಾಕಾಂಡ ತಪ್ಪಿಸಬಹುದು. ಈ ಮನಸ್ಥಿತಿ ಎಲ್ಲರಲ್ಲೂ ಮೂಡಲಿ ಎಂದು ಆಶಿಸೋಣ
ಓದಿ, ಓದಿಸಿ
மனித மனதில் வெறுப்பு என்ற உணர்ச்சி மிக எளிதாக நுழைந்த விடுகிறது. ஒவ்வொரு மனிதனுக்கும் விருப்புவெறுப்புகள் தனித்தனியாக இயல்பாகவே இருக்கும். அது தவிர்க்க முடியாதது. சிறுவயதில் எனக்கு ரொட்டி மீது இனம் புரியாத கடுமையான வெறுப்பு இருந்தது. ஆனால் இன்று உலகம் முழுவதும் சென்று விதவிதமான ரொட்டிகளை சுவைத்த பின், ரொட்டிகளின் மீது எனக்கென்று தனித் தேர்வாக அது பரிணமித்துவிட்டது. அன்று எனக்கு இருந்த வெறுப்பின் வேர்களைப்பற்றி எண்ணிப்பார்த்தால், அப்போது காய்ச்சலின் போது கட்டாயப்படுத்தி உண்ண வைத்த ரொட்டியில் வந்து நிற்கும்.
இப்படி இயல்பாக எழும் வெறுப்புகள், வாழ்வின் அனுபவச் செறிவாலும், மன முதிர்ச்சியினாலும் மாறிப்போவது கூட இயல்புதான்.
ஆனால் சிலநேரங்களில் நம் வாழ்வில் எதிர்பாராத விரும்பத்தகாத, பேரதிர்ச்சி தரும் நிகழ்வுகளை எதிர்கொள்ள நேர்கிறது. அதன் காரணமாக இரண்டு விதமான விளைவுகள் நேரலாம். ஒன்று, அந்த நிகழ்வுகளின் வழியே ஏற்பட்ட புரிதலால், அப்படி ஒரு நிலை நமக்கோ, நம்மைச் சார்ந்தவர்களுக்கோ நேராமல் இருக்க என்ன செய்வது என்று அக்கறையும் அன்பும் மேலோட வழியமைக்கலாம். அது நமக்கும், நம்மை சார்ந்தவர்களுக்கும், ஒரு சீரிய பாதையை வகுத்து, சமூக முன்னேற்றத்துக்கு வழிகாட்டலாம்.
அப்படி இல்லாமல், மாறாக, அலைக்கழிக்கப்படும் நம் மனம், அந்த நிலைக்குக் காரணமாக நாம் கருதும் ஏதோ ஒன்றின் மீது வெறுப்பை குவித்து வைத்துக்கொள்ளலாம். அது ஆழமான வடுவாக மனதில் என்றும் தங்கி எஞ்சிய வாழ்நாள் முழுதும் நம் எண்ணங்களின் அடிப்படையாக அமைந்துபோகலாம். அப்படி நடந்தால், அது சோகமான நிகழ்வு மட்டுமல்ல. நம்மையைம், நம்மை சார்ந்த சமூகத்துக்கும் கேடாகவே முடியும்.
இறுகிப்போன இந்நிலை நிகழ முக்கிய காரணம், ஆங்கிலத்தில் confirmation bias என்று கூறுவார்களே, அப்படிப்பட்ட சார்புப்பிழை நிலைப்பாட்டை நாம் கைகொள்வது தான். அந்தப் பிழையான நிலைப்பாட்டின் முடிச்சு,ஏதோவொரு இறுகிப்போன மத, இன அல்லது சிந்தாந்தந்தின் நுழைவாயிலில் நிறுத்துவது எதேச்சையான நிகழ்வு அல்ல. படுகொலைகளை நிகழ்த்திய டார்கமெடாவும் கைவிடப்பட்ட நோயாளிகளுக்கு ஆதரவு தந்த அன்னை தெரேசாவும் தங்கள் நிலைப்பாட்டை ஒரே மதத்தில் இருந்தே தேடிக்கண்டைந்தனர். ஒன்று வெறுப்பை பயிர்செய்தது; இன்னொன்று அன்பை விதைத்தது. மதத்தின் பெயரால் இந்த பூமியில் நடந்த நன்மைகள் அளவுக்கு அதன் பெயரால் கொடுமைகளும் உள்ளதை வரலாறு பதிவு செய்கிறது.
எனக்குத் தெரிந்த நண்பர் ஒருவர் தன் இளவயதில் மாற்று மதத்தைச் சேர்ந்த பெண்ணை விரும்பினார். ஆனால் அது கைகூடவில்லை. அந்த கசப்பான நிகழ்வுகளின் விளைவாக இன்றுவரை அந்த மதத்தின்மீது அவருக்கு இருக்கும் வெறுப்பு இப்போது அளவுகடந்ததாக மாறி இருக்கிறது. இன்னொரு நண்பர், வாழ்வின் இறுதிக்கட்டம் வரை சென்று மருத்துவ உதவியுடன் மீண்டு வந்திருக்கிறார். அவர் வாழ்வின் நம்பிக்கையை இழந்த காலத்தில் அவருக்கு இறை நம்பிக்கை ஒரு ஊன்றுகோலாக வந்துசேர்ந்தது. அது மத நம்பிக்கையாக மாறி, வெறியாய் இறுகி, இன்று யார் வீட்டுக்கு சென்றாலும் அவர்கள் பூஜையறை அளவை வைத்து அவர்களைப் பற்றி முடிவு செய்துகொள்ளும் முட்டாள்தனத்தில் அவரைக் கொண்டுவந்து நிறுத்தியிருக்கிறது. இருவரும் தங்கள் பதவியினால் கிடைக்கும் சலுகைகளை மும்முரமாக தங்கள் மதம் சார்ந்த அரசியல்குழுக்களுக்கு மடை மாற்றிக் கொண்டிருக்கின்றனர்.
உண்மையில் மதங்களை ஒழித்துவிட்டால், மனிதர்கள் ஒன்றும் உடனே புனிதர்கள் ஆகிவிடப்போவதில்லை. ஆனால் நிறுவனமயமான எந்த மதமும், அதன் கோட்பாடுகளையும் அதன் சட்டதிட்டங்களையும் மனிதர்கள் மீது திணிக்கும் போது, மனிதர்களின் அனுபவ ரீதியான முதிர்ச்சியை நிகழவிடாமல் செய்கின்றன. அவர்கள் வெறுக்கும் விஷயங்கள் மதங்களின் பார்வையோடும் ஏதோ ஒரு புள்ளியில் இணையும்போது, அவர்களின் வெறுப்பு இறுகி, அதற்கான நியாயம் அவர்கள் பின்பற்றும் மதங்களின் வேதங்களில் இருந்தே அவர்களுக்கு கிடைத்துவிடுகிறது.
அப்படி நிகழ்ந்த ஒரு மாபெரும் வெறுப்பின் வெளிப்பாடு, போன நூற்றாண்டில் மானுட இனத்தையே புரட்டிப்போட்ட யூத இனவழிப்பு. அந்த பேரழிவை, அதன் சோகத்தை, கொடுமைகளை பற்பல இலக்கியங்கள் நம் கண்முன்னே நிறுத்தியுள்ளன. அதன் மூலம் அதை வாசித்தவர்கள் கரைந்து கண்ணீர் விட்டது உண்மை. அப்படிக் கரையவைத்த இலக்கியங்கள் அந்த, சோகத்தை சிறப்பாக வடித்தபோதும், அரிதாக வெகுசில எழுத்துக்களே அதிலிருந்து மீண்டுவரும் வழியை காட்டுகின்றன. அந்த வகையில் கன்னடத்தில் நேமிசந்த்ரா அவர்கள் எழுதிய சாகித்ய அகாதெமி பரிசு பெற்ற புதினமான யாத் வஷேம், ஒரு தனித்தன்மையான எழுத்து. இது ஒரு உலகளாவிய பார்வையுடன், மிகுந்த ஆய்வுகளுக்குப்பின், உருவாக்கப்பட்ட சிறப்பான படைப்பு. முக்கியமாக, இது பேரழிவை மட்டும் பேசாமல் அதிலிருந்து மீண்டுவரும் வழியையும் விரிவாகக் காட்டுகிறது.
நேமி சந்த்ரா அடிப்படையில் ஒரு வானுர்திப் பொறியாளர். HAL என்னும் அரசு நிறுவனத்தில் பொறியாளராக ஆரம்பித்து, பொது மேலாளராக உயர்ந்த ஒரு பெண் சாதனையாளர். இதற்காக அரசு விருதுகள் பெற்றவர். அதையெல்லாம் தாண்டி, கன்னட இலக்கிய உலகில் குறிப்பிடத்தக்க படைப்பாளி. இதற்கு முன்பே இவருடைய பல படைப்புகள் விருதுகளை வென்றபோதும், அவர் படைப்பு தமிழ் வாசகர்களுக்கு கிட்டியது, அதுவும் இவ்வளவு சிறப்பான வகையில் மொழிபெயர்க்கப்பட்டு வெளிவந்திருப்பது மகிழ்ச்சிகரமான விஷயம். இந்த புத்தகத்தின் இறுதியில் நேமி சந்த்ரா இந்த புத்தகத்துக்கான தரவுகளை தேடி நிகழ்த்திய முயற்சிகளையும், பயணங்களையும் பற்றி மிக விரிவாக எழுதியுள்ளார். என்னைப்பொறுத்தவரை, அது முக்கியமாக வாசிக்கப்படவேண்டிய பகுதியாகும். ஒரு அரசு நிறுவன ஊழியராக இருந்து கொண்டு இவை அனைத்தையும் செய்ய எவ்வளவு பாடுபட்டிருக்கவேண்டும் என்று நினைத்துப்பார்த்தால் பிரமிக்க வைக்கிறது!
நல்லதம்பியும் அடிப்படையில் ஒரு பன்னாட்டு நிறுவனத்தின் இந்திய கிளையில் தலைமைப் பதவி வகித்தவர் என்ற போதும், மிக விரிவான வாசகர், படைப்பாளி. இவரின் தனிப் படைப்புகள் தமிழில் வெளிவந்திருந்தாலும், இவர் மொழிபெயர்ப்புகளையே இதுவரை வாசித்திருக்கிறேன். அனைத்திலும் குறிப்பிடத்தக்க பொதுவான அம்சமாக நான் கருதுவது, இவர் கன்னடத்தில் இருந்து மொழிபெயர்த்த அத்தனை புதினங்களும், தமிழிலேயே நேரடியாக எழுதப்பட்டது போல் இருப்பது. அது போன்ற ஒரு மிக இலகுவான மொழி நடை இவருக்கு கைகூடியிருக்கிறது. மைசூரில் பிறந்து வளர்ந்தவர் என்றாலும், ஒரு புகைப்படக்கலைஞர் என்பதாலோ என்னவோ, இவர் சொற்களில் ஒரு நேர்த்தியும், எளிமையும், கச்சிதமான கட்டமைப்பும் இயல்பாகவே அமைந்திருக்கிறது. இது வாசிப்பை மிக இலகுவாக்கி, முதல் வரியில் இருந்தே வாசகரை உள்ளிழுத்துக்கொள்கின்றது.
இந்தப்புதினத்தைப் பொறுத்தவரை, போன வருடம் இதை வாசித்தபோதே இதன் தாக்கத்தை பலமாக உணர்ந்தேன். இந்த பதிவை எழுதுவதற்காக, குறிப்பெடுக்��� மறுவாசிப்பை செய்யும் போது, மறுபடியும் புதிதாக வாசிப்பது போல் ஆர்வம் மேலிட்டது. அத்தோடு, போன முறை துளங்காத பல அடுக்குகள் இதில் தெளிவாக துலங்கின. தொடர்ந்து, பக்கங்களில் விரிந்த குறிப்புகளை பார்த்த போது, எதைச் சொல்லுவது, எதை விடுப்பது என்பது எனக்கு ஒரு சிக்கலாகவே, பெரும் மலைப்பாக இருந்தது.
பிறகு, ஒருவாறு தெளிந்து, இதன் அழகிய, அடுக்குகள் பலவற்றையும், அவை என்மேல் ஏற்படுத்திய தாக்கத்தையும் குறிப்பிடுவது ஒரு தனி புத்தகமாகிவிடும் அபாயம் இருந்ததால், இதன் முக்கிய கருப்பொருளை குறிப்பிடுவதோடு நிறுத்திக்கொள்ளலாம் என்று முடிவு செய்தேன். அதற்கு காரணம், இந்த புத்தகம் என் சொந்த மனநிலையில் ஏற்படுத்திய மாற்றமும், அதனால் என் மனதில் 20 வருடங்களுக்கு மேலாக இருந்த காயங்களை ஆற்றிய விதமும் தான்.
இந்தப் புத்தகம் முதலில், இரண்டாம் உலகப்போரின் மத்தியில், சிதறிய குடும்பத்தின் பகுதியாக இந்தியா வந்த ஓரு யூத சிறுமியின் வாழ்க்கையும் தேடலும் என்றே துவங்கினாலும், இது தொட்டு செல்லும் அடுக்குகள் மிக நுணுக்கமானவை. அவளை இணைத்துக்கொண்ட பழைய மைசூர் மாநில, தென் கருநாடகத்தின் ஒக்கலிகர் சமூகத்தைச் சேர்ந்த குடும்பத்தின் வாழ்வின் வழியாக, அப்போது இருந்த பெங்களூர், அதன் பகுதிகள், அதன் சமூக சாதி அமைப்புகள், அதற்குள்ளே அந்த குடும்பத்தின் தலைவருக்கு இருந்த அபிலாஷைகள், அதற்காக சாதி அமைப்போடு அவர்கள் செய்துகொள்ளும் சமரசங்கள், என சுவாரசியமாக ஆரம்பிக்கிறது.
சாதிய முரண்பாடுகளையும் அதன் வலிகளையும் மிக அழுத்தமாக பதிவு செய்திருக்கிறார். இது நிகழ்ந்ததாக கூறப்படும் காலத்தில் இருந்து 50 - 60 வருடங்கள் கழிந்த பின்னும், ஒரு சிறுவனாக அந்த சூத்திரன் என்ற பதத்தை முதன் முதலாக எதிர்கொண்ட போது ஏற்பட்ட குழப்பத்தையும் வலியையும் இதில் வரும் வரிகள் நினைவுபடுத்துகின்றன.
ஆரம்பத்தில் ஹிட்லர் என்ற சொல் வன்முறை, பயங்கரம், என்று அர்த்தம் கொள்ளப்பட்டு, அது இல்லாத உலகம் வருமா என்ற கேள்வியுடன் தான் புத்தகம் துவங்குகிறது.
தொடர்ந்து பெங்களூரின், விமான தொழிற்சாலை அமைக்கப்பட்ட சரித்திரத்தை சுவாரசியமாக சொல்லியிருக்கிறார்.இன்றைய பெங்களூரின் பழகிய இடங்களை அன்றைய சம்பவங்களில் சந்திக்கும் போது வரும் உணர்வுகள் அலாதியானவை.
வாசித்தவுடன் நான் எதையோ நினைத்து சிரித்துக்கொண்டேன்.
ஏக்கத்தோடு, தன் குடும்பத்தின் நிலையை அறிந்துகொள்ளவும் அதில் ஏதாவது உறவு மிச்சமாகி, தப்பிப்பிழைத்திருக்குமா என்ற ஏக்கத்தை தீர்க்கவும் விவேக்கும், அனிதாவும் ( ஹயானா ) தொடரும் உலகப்பயணம், ஐரோப்பிய சரித்திரத்தின் இருண்ட பக்கங்களை புரட்டவும், அதன் தற்கால நிலையையும் கண்ணில் நிறுத்துகிறது.
ஒரு மானுடப் பேரிடரில் சிதறுண்ட ஒரு குடும்பத்தின் இரு கிளைகளில், ஒன்று அன்பில் அமிழ்ந்தும், இன்னொன்று வெறுப்பில் வெம்பியும் வளர்ந்தால், இரண்டு கிளைகளும் மறுபடியும் சந்திக்கும் போது அன்பின் மொழிதான் எதிர்காலத்தின் நம்பிக்கைக்கும��� கடந்தகால வலிகளுக்கும் மருந்தாக இருக்கும் என்ற செய்தியை உறுதியாக பதிவு செய்யும் படைப்பு இது.
இது நாம் ஒவ்வொருவரும் நம்மை நோக்கி வைக்கவேண்டிய கேள்வி. அதற்கு பதிலாக, வெறுப்பென்ற ஹிட்லரை விரட்டிட அன்பு, அன்பு, அன்பு ஒன்றுதான் நாளைக்கான ஒளி என்று நம்பிக்கை நிறைந்த கண்ணீரோடு புத்தகத்தை மூடி வைத்தேன்.